Notice Board

Results of end semester Examination May 2016 announced on this Blog

Sunday, December 11, 2011

Results of Examination November 2011

for
Detailed Marks List of the Examination 
November 2011

Result Nov 2011 - Full Edition

2011 ರ ಫಲಿತಾಂಶ - ವಿವರಗಳು- Details of the Results of Nov 2011 Exams

2011  ರ ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 
ಅಭಿನಂದನೆಗಳು.
ವಿದ್ಯಾರ್ಥಿಗಳು ತಮ್ಮ ಅಂಕ ಪಟ್ಟಿಯನ್ನು ತಿಳಿಯಲು ನಿಮ್ಮ ತರಗತಿಯನ್ನು ನಮೂದಿಸಿರುವ ಈ ಕೆಳಗಿನ ಲಿಂಕ್ ಉಪಯೋಗಿಸಿ

CONGRATULATIONS 
for those who are successful in their End semester Exam November 2011.
View your Marks list in the link of the  respective Class list given below




Friday, December 9, 2011

Results of Examination November 2011

FAILED CANDIDATES MAY KNOW THEIR MARKS FROM THE OFFICE BETWEEN 3.30 P.M. AND 5.30 P.M. FROM MONDAY, 12-12-2011

SUPPLEMENTARY EXAMINATION WILL BE HELD FROM 4TH JAN 2012 APPLICATIONS FOR SUPPLEMENTARY EXAMINATION WILL BE ISSUED ON 19TH & 20TH DEC 2011 EXAMINATION FEE WILL BE RECEIVED FROM 22ND  TO 24TH  DEC 2011
   COLLEGE RE-OPENS ON 19TH DEC 2011 AS PER THE REGULAR TIME TABLE.

Revaluation: B.A./B.Sc:/B.Com /BCA  (should apply with in 7days after the Results] i.e., on or before 17-12-2011.

Revaluation Fee 
B.A., B.Sc., B.Com :-Rs. 230-00 Per Paper + Rs. 20-00  (For Application Form) Rs. 100-00 + 20-00 for SC/ST/BT
B.C.A.:-Rs. 530-00 Per Paper + Rs. 20-00 (For Application Form)Rs. 250-00 + 20-00 for SC/ST/BT

No Revaluation for Practical Examination.
Photocopy of the Answer Book: Rs.400-00 per paper (common to all categories) (should apply with in 7days after the Results]  i.e., on or before 17-12-2011.

Results of Examination November 2011

Results of the Examination 
conducted in November 2011 
will be announced in the college Notice board 
on 10-12-2011 
at 11 AM.
At the same time it will be announced in this blog also.

Sunday, October 23, 2011

ಬೀದಿ ನಾಟಕ ಪ್ರದರ್ಶನ

ರಂಗಶಂಕರದಲ್ಲಿ 
ಅಕ್ಟೋಬರ್ ರಂಗ ಉತ್ಸವದ ಸಂದರ್ಭದಲ್ಲಿ 
ರಂಗಶಂಕರದ ಆಹ್ವಾನದ ಮೇರೆಗೆ 
ಅಕ್ಟೋಬರ್ ೧೫ ಮತ್ತು ೨೩ ರಂದು 
ನಮ್ಮ ಕಾಲೇಜಿನ ರಂಗ ಪ್ರಯೋಗಶಾಲೆ ವಿದ್ಯಾರ್ಥಿಗಳು 
’ಕತ್ತೆ ಪುರಾಣ’
 ಎಂಬ ಬೀದಿ ನಾಟಕವನ್ನು ಪ್ರದರ್ಶಿಸಿದರು. 
ಅಷ್ಟೇ ಅಲ್ಲದೆ ಅಕ್ಟೋಬರ್ ೧೦ ರಂದು ಕಾಲೇಜಿನ ಆವರಣದಲ್ಲಿ  
೧೨ ರಂದು ಎನ್.ಆರ್.ಕಾಲೋನಿ ರಾಮಮಂದಿರದ ಹಿಂದೆಯೂ 
ಇದೇ ನಾಟಕವನ್ನು ಪ್ರದರ್ಶಿಸಲಾಯಿತು.
ಅಕ್ಟೋಬರ್ ೨೩ ಭಾನುವಾರದಂದು ರಂಗಶಂಕರದಲ್ಲಿ ಪ್ರದರ್ಶಿತವಾದ ಈ ನಾಟಕದ ಚಿತ್ರಗಳು
















STREET THEATRE AT RANGA SHANKARA

Amateur yet powerful: college students' make political statement

Street plays are perfect vehicles for political protest. Plays by three college groups at the Ranga Shankara Theatre Festival last week won applause, sometimes for clever lines and at other times for their message
By Umesh P N


ನಾಟಕದ ಬಗ್ಗೆ ಈ ಮೇಲಿನ ವಿಮರ್ಶೆಯ ಪೂರ್ಣಪಾಠವನ್ನು ಓದಲು ಈ ಲಿಂಕ್ ಉಪಯೋಗಿಸಿ : http://bangalore.citizenmatters.in/articles/view/3519-ranga-shankara-street-play-by-college-groups


Thursday, October 13, 2011

2011-12ನೇ ಸಾಲಿನ ಸ್ನಾತಕೋತ್ತರ ತರಗತಿಗಳ ಉದ್ಘಾಟನೆ

ದಿನಾಂಕ 12-9-2011 ರಂದು ಬೆಳಿಗ್ಗೆ 11 ಗಂಟೆಗೆ ಎಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಈ ಸಾಲಿನ ಸ್ನಾತಕೋತ್ತರ ತರಗತಿಗಳ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಯಿತು. ಕೆ.ಎಸ್.ಜಿ ಶಂಕರ್ ಅವರು ಮುಖ್ಯ ಅತಿಥಿಗಳಾಗಿದ್ದು , ಡಾ.ಎ.ಎಚ್.ರಾಮರಾವ್ ಅವರು ಅಧ್ಯಕ್ಷತೆ ವಹಿಸಿದ್ದರು, ನಮ್ಮ ಸಂಸ್ಥೆಯ ಕಾರ್ಯದರ್ಶಿ ಪ್ರೊ.ನಾಗರಾಜ ರೆಡ್ಡಿಯವರುಉಪಸ್ಥಿತರಿದ್ದರು, ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಲೀಲಾವತಿಯವರು ವಂದನಾರ್ಪಣೆಯನ್ನು ಮಾಡಿದರು.

Wednesday, October 5, 2011

Botanical Tour September 2011


Botanical  Tour  2011  –  A  Report
A Botanical study cum collection tour was organized ,during September 2011,by the  Department of Botany, The National College, Basavanagudi, Bangalore 560 004 under the patronage of the Principal Dr.M.Leelavathi. She envisaged keen interest in the academic proceedings, trekked the forests, and visited every point of botanical interest almost simulating a sincere student of plant biology. Students of the V semester were guided on the tour by Dr.H.Gokul, Professor & Head, Department of Botany and Prof.D.E.Murthy Rao. The itinerary included an invited visit to the Botanical Garden, Calicut University, which includes a repository of more than 150 species of ‘Ornamental Gingers’, the Spice garden, Green House, Ginger Zone, Medicinal Plant House, Ginger House and Spices House. Dr.Sabu, Professor made elaborate arrangements facilitating the visit very academic. Dr.A.K.Pradeep,Professor of Botany in the Department rendered a demonstration –lecture on the Herbaria. Mr.Alfred,JRF-DST, accompanied the National College party all around the 5 acre- wonderfully maintained Botanical Garden, which has the reputation of being the ‘Best Maintained Botanical  Garden ’ in comparison with any University garden in Asia. Students had the opportunity to observe and study rare species such as Zamia, Gnetum and Victoria.       

The visit to the R&D institute of Arya Vaidya Shala -Centre for Medicinal Plants Research  ( CMPR)  at Kotakal was enriched by the explanation of  Dr.Suresh George and Dr.Sadashiva, Senior Scientists of the institute. Dr.A.B.Remashree, Sr.Scientist, Pharmacognosy gave a  PPT about the research activities of the TATA-DST-DBT-ICMR  funded, Dr Swaminathan - Dr.Abdul Kalam patronized research centre. Students & faculty were fortunate to watch the functioning of LC MS Facility (there are only two such facilities in India). Phytochemical analysis of Raw Drugs was demonstrated.





The visit to The Rappinat Herbarium at St.Joseph’s College,Tiruchirapalli was a very productive experience since its Director Fr.John Britto, personally explained about the Herbarium, herbarium techniques and the need to revitalize Plant Taxonomy. The Rappinat Herbarium has the worldwide reputation as an accredited herbarium recognized by Kew, London and the world Botanical Fraternity. The Director was personally impressed by the interest and interaction of the NCB students in plant taxonomy and even expressed his appreciation as
“Wish you were my students”







Enroute on this academic tour other places of visit included the Guruvayur Temple, Synagogue at Cochin, water ways of Alleppuzha, Tiruvanathapuram, Algae on the rocks at Kanyakumari, the Vivekananda Rock Memorial – Thiruvallavar statue, Madurai and Srirangam.
Thus it was a balanced combination of academic-nature exposure-spiritual and camaraderie journey to enrich the final year B.Sc life science students.
A tour report (technical-botanical) - 10 marks and herbarium submission- 10 marks forms a part of the approved syllabus of the autonomous course in B.Sc (CBZ) at NCB for the V semester practical examination.





The Department of Botany, NCB expresses its deep sense of gratitude to the Principal and Management, NES for the support and encouragement in this regard.

Sunday, October 2, 2011

2 ಅಕ್ಟೋಬರ್ 2011 ಗಾಂಧಿ ಜಯಂತಿ ಸಮಾರಂಭ

ಈ ವರ್ಷದ ಗಾಂಧಿ ಜಯಂತಿ ಸಮಾರಂಭವನ್ನು ಸರಿಯಾಗಿ ಬೆಳಿಗ್ಗೆ 9.15ಕ್ಕೆ ಡಾ. ಹೆಚ್.ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ವಿದ್ಯಾರ್ಥಿಗಳು ’ರಘುಪತಿ ರಾಘವ ರಾಜಾರಾಂ, ವೈಷ್ಣವ ಜನತೋ’ ಮುಂತಾದ ಹಾಡುಗಳನ್ನು ಹಾಡಿ ಪ್ರಾರಂಭಿಸಿದರು. ಎನ್.ಇ.ಎಸ್. ಸಂಸ್ಥೆಯ ಅಧ್ಯಕ್ಷರಾದ ಡಾ.ಎ.ಎಚ್.ರಾಮರಾವ್ ಅವರು ಸ್ವಾಗತ ಭಾಷಣ ಮಾಡುತ್ತಾ, ಸಂಸ್ಥೆಯು ನಡೆಸಿಕೊಂಡು ಬರುತ್ತಿರುವ ಗಾಂಧಿ ಮೌಲ್ಯಗಳನ್ನು ತಿಳಿಸಿದರು. ಡಾ.ಎಚ್.ಎನ್ ಅಂಥವರಿಂದ ನಮ್ಮ ಸಂಸ್ಥೆಗಳು ಇಂದಿಗೂ ಗಾಂಧಿ ಆದರ್ಶ ಮಾರ್ಗವನ್ನು ಅನುಸರಿಸುತ್ತಿದೆ ಎಂದರು. ಇಂದಿನ ಮುಖ್ಯ ಅತಿಥಿಗಳಾದ ಹಾನಗಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಚಂದ್ರಶೇಖರ ನಂಗಲಿ ಅವರು ’ಮಹಾತ್ಮ ಗಾಂಧಿಜಿ ಅವರ ಹಸಿರು ಕಾಳಜಿ’ ಎಂಬ ವಿಷಯವನ್ನು ಕುರಿತು ಮಾತನಾಡಿ, ನಿಸರ್ಗ ಮತ್ತು ಮಾನವನ ಸಂಬಂಧಗಳು, ಮಾನವನ ಆಸೆಬುರುಕತನ ಮುಂತಾದವುಗಳನ್ನು ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿಕೊಟ್ಟರು. ಗಾಂಧಿ ಸ್ಟಡಿ ಸರ್ಕಲ್ ನ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಲೀಲಾವತಿಯವರು ವಂದನಾರ್ಪಣೆ ಮಾಡಿದರು. ನಮ್ಮ ವಿದ್ಯಾರ್ಥಿಗಳಿಗಾಗಿ ನಡೆಸಲಾಗುತ್ತಿರುವ ’ಗಾಂಧಿ ಮತ್ತು ಸಾಮಾಜಿಕ ಅಭಿವೃದ್ಧಿ’ ಎಂಬ  Add-on Courseನ ಸಂಚಾಲಕಿ ಡಾ. ಟಿ.ಪದ್ಮ ಕಾರ್ಯಕ್ರಮ ನಡೆಸಿಕೊಟ್ಟರು.

Saturday, September 24, 2011

ಕು. ವನಿತಾ ಸ್ಮಾರಕ 10ನೇ ರಾಜ್ಯಮಟ್ಟದ ಕನ್ನಡ ಚರ್ಚಾ ಸ್ಪರ್ಧೆ


ಬೆಂಗಳೂರು, ಸೆ 24: ಕನ್ನಡ ಭಾಷೆಯ ಉಳಿವಿಗೆ ಹಾಗೂ ಬೆಳವಣಿಗೆಗೆ ಕನ್ನಡ  ಚರ್ಚಾ ಸ್ಪರ್ಧೆಗಳು ಪೂರಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ನಲ್ಲೂರು ಪ್ರಸಾದ್ ಪ್ರತಿಪಾದಿಸಿದರು.
ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿಂದು ನಡೆದ ಕು. ವನಿತಾ ಸ್ಮಾರಕ 10ನೇ ರಾಜ್ಯಮಟ್ಟದ ಕನ್ನಡ  ಚರ್ಚಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು,  ಚರ್ಚಾ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹಾಗೂ ವೈಚಾರಿಕತೆ ಜಾಗೃತಗೊಳಿಸುತ್ತವೆ ಎಂದು ಹೇಳಿದರು.
ಕ್ರೀಡಾಪಟುಗಳಿಗೆ ಉನ್ನತ ಶಿಕ್ಷಣದಲ್ಲಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಇರುವಂತೆಯೇ ಚರ್ಚೆ, ಭಾಷಣ, ಗಾಯನ ಸೇರಿದಂತೆ ರಾಜ್ಯ ಮಟ್ಟದ ಸಾಂಸ್ಕೃತಿಕ  ಸ್ಪರ್ಧೆಗಳಲ್ಲಿ ಜಯ ಸಾಧಿಸಿದವರಿಗೆ ಕೂಡ ಮೀಸಲಾತಿ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
 ಚರ್ಚಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಸ್ಪರ್ಧಿಗಳಲ್ಲಿ ಚಿಂತನೆಯ ಗಣ ಮೈಗೂಡುತ್ತದೆ, ನಾಯಕತ್ವದ ಗುಣ ಬೆಳೆಯುತ್ತದೆ ಎಂದರು. ಅಗಲಿದ ಪುತ್ರಿಯ ಹೆಸರಿನಲ್ಲಿ ಚರ್ಚಾ ಸ್ಪರ್ಧೆ ನಡೆಸಿ ಇಂದಿನ ಚರ್ಚಾಪಟುಗಳಲ್ಲಿ ತಮ್ಮ ಮಗಳನ್ನು ಕಾಣುತ್ತಿರುವ ಹಿರಿಯ ವಕೀಲ ಮಲ್ಲೇಶಯ್ಯ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಬೆಂಗಳೂರು ದೂರದರ್ಶನ ಕೇಂದ್ರದ ಸುದ್ದಿ ವಿಭಾಗದ ನಿರ್ದೇಶಕ ಎಸ್.ಜಿ. ರವೀಂದ್ರ, ಕಾಲೇಜಿನ ಉಪ ಪ್ರಾಚಾರ್ಯರಾದ ಪ್ರಮೋದ್ ಮುತಾಲಿಕ್ ಮೊದಲಾದವರು ಪಾಲ್ಗೊಂಡಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 80 ಕಾಲೇಜುಗಳ 164 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದ ಸ್ಪರ್ಧೆಯಲ್ಲಿ ಪದವಿಪೂರ್ವ ವಿಭಾಗದ ಪಾರಿತೋಷಕವನ್ನು ರೂರಲ್ ಕಾಲೇಜು ಕನಕಪುರ    ಹಾಗೂ ಪದವಿ ವಿಭಾಗದ ಪಾರಿತೋಷಕವನ್ನು ಸರ್ಕಾರಿ ಪದವಿ ಕಾಲೇಜು ವಿಜಯನಗರ ಬೆಂಗಳೂರು ಪಡೆದರು.
ನ್ಯಾಷನಲ್ ಎಜ್ಯುಕೇಷನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎ.ಎಚ್. ರಾಮರಾವ್ ಪ್ರಶಸ್ತಿ ಪ್ರದಾನ ಮಾಡಿದರು. ಶ್ರೀ ಸದ್ಗುರು ಸಾಯಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಭಾಕರರೆಡ್ಡಿಯವರು, ಹಾಗು ನಮ್ಮ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮೌಳೇಶ್ ಅವರು, ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ.ಎಂ.ಕೆ.ಶ್ರೀಧರ್ ಅವರು  ಉಪಸ್ಥಿತರಿದ್ದರು.

Monday, September 12, 2011

Wednesday, September 7, 2011

7 ಸೆಪ್ಟೆಂಬರ್ 2011

 ನಮ್ಮ ಕಾಲೇಜಿನ ಹಿರಿಯ ವಿದ್ಯಾರ್ಥಿ 
ಚನ್ನಬಸವ ಸ್ವಾಮಿ ಹಿರೇಮಠ, ಅಭಿನಯಿಸಿದ 
ಅಂಟನ್ ಚೆಕಾವ್ ಬರೆದ ಸಣ್ಣ ಕಥೆ The Bet ಆಧರಿಸಿದ
ಏಕ ವ್ಯಕ್ತಿ ಪ್ರದರ್ಶನ
’ಪಂಥ"
ಪ್ರದರ್ಶನಗೊಂಡು ಅಧ್ಯಾಪಕರು ಹಾಗು ವಿದ್ಯಾರ್ಥಿಗಳ ಮೆಚ್ಚುಗೆಗೆ ಪಾತ್ರವಾಯಿತು.



Friday, August 26, 2011

ಮಹಿಷಾಸುರ ಮರ್ದಿನಿ ಅಥವಾ ದೇವೀ ಮಹಾತ್ಮೆ, ಯಕ್ಷಗಾನ ಪ್ರದರ್ಶನ

ನಮ್ಮ ಕಾಲೇಜಿನ ಅಧ್ಯಾಪಕ ಹಾಗು ಅಧ್ಯಾಪಕೇತರರ ತಂಡ ಈ ವರ್ಷ ೧೫-೮-೨೦೧೧ ರಂದು ಸಂಜೆ ಮಹಿಷಾಸುರ ಮರ್ದಿನಿ ಅಥವಾ ದೇವೀ ಮಹಾತ್ಮೆ, ಎಂಬ ಯಕ್ಷಗಾನ ಪ್ರದರ್ಶನವನ್ನು ನೆರವೇರಿಸಿಕೊಟ್ಟರು

ಮಹಿಷಾಸುರ ಮರ್ದಿನಿ 
ಅಥವಾ ದೇವೀ ಮಹಾತ್ಮೆ, 
ಕೆಲವು ಚಿತ್ರಗಳು