Notice Board

Results of end semester Examination May 2016 announced on this Blog

Saturday, July 16, 2011

ಶ್ರದ್ಧಾ- ಸಂಸ್ಕೃತ ವಾರ್ಷಿಕ ಪತ್ರಿಕೆಯ ಬಿಡುಗಡೆ ಸಮಾರಂಭ

ನ್ಯಾಷನಲ್ ಕಾಲೇಜು ಬಸವನಗುಡಿ, ಹಾಗು ನ್ಯಾಷನಲ್ ಕಾಲೇಜು ಜಯನಗರ ಇವುಗಳ ಮುಂದಾಳತ್ವದಲ್ಲಿ ನಮ್ಮ ಎನ್.ಇ.ಎಸ್. ಸಂಸ್ಥೆಯು ಹೊರತಂದಿರುವ ’ಶ್ರದ್ಧಾ’- ಎಂಬ ವಾರ್ಷಿಕ ಸಂಸ್ಕೃತ ಪತ್ರಿಕೆಯನ್ನು ಶ್ರೀ ಮಹಾಮಹೋಪಾಧ್ಯಾಯ ವೇದಾಂತ ಚಕ್ರವರ್ತಿ ವಿದ್ವಾನ್ ಕೆ.ಜಿ. ಸುಬ್ರಾಯ ಶರ್ಮರು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಸಂಸ್ಥೆಯ ಪ್ರಭಾರಿ ಅಧ್ಯಕ್ಷರಾದ ಶ್ರೀಯುತ ಡಿ.ಎನ್.ಆನಂದ್ ಅವರು ಅಧ್ಯಕ್ಷತೆ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಲೀಲಾವತಿ, ಉಪ ಪ್ರಾಂಶುಪಾಲರಾದ ಪ್ರೊ.ಪ್ರಮೋದ್ ಆರ್ ಮುತಾಲಿಕ್ ಅವರುಗಳು ಹಾಗು ಪಿಯು ಪ್ರಾಂಶುಪಾಲರಾದ ಪ್ರೊ.ಹೆಚ್.ಕೆ.ಅಂಬಿಕಾ ಅವರುಗಳು ಉಪಸ್ಥಿತರಿದ್ದರು. ಡಾ. ಎಂ.ಕೆ.ಶ್ರೀಧರ್ ಕಾರ್ಯಕ್ರಮ ನಡೆಸಿಕೊಟ್ಟರು. ಡಾ.ಹೆಚ್.ವಿ.ವೇಣುಗೋಪಾಲ್ ಸಂಸ್ಕೃತ ವಿಭಾಗದ ಮುಖ್ಯಸ್ಥರು ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದ ಚಿತ್ರಗಳು







No comments:

Post a Comment